Flash News

welcome to Chippar school blog....ಚಿಪ್ಪಾರು ಶಾಲಾ ಬ್ಲಾಗಿಗೆ ಸ್ವಾಗತ..... .. FLASH NEWS.....ONAM EXAMINATION STARTS ON 30.08.2016..................... H.A.U.P.SCHOOL CHIPPAR......... welcome to chippar school blog...................

Sunday 23 July 2017

ಚಾಂದ್ರ ದಿನಾಚರಣೆ.

 ದಿನಾಂಕ 21-07-2017 ರಂದು ಚಾಂದ್ರ ದಿನವನ್ನು ಆಚರಿಸಲಾಯಿತು.
ಏಳನೇ ತರಗತಿಯ ವಿದ್ಯಾರ್ಥಿಯಾದ ರಜತ್ ಚಾಂದ್ರಯಾನಕ್ಕೆ ಸಂಬಂಧಿಸಿದ ಪ್ರಬಂಧ ಮಂಡಿಸಿದನು.
 ಏಳನೇ ತರಗತಿಯ ವಿದ್ಯಾರ್ಥಿ ಹೇಮಂತ್ ಪ್ರಬಂಧ ಮಂಡಿಸಿದನು.
ವಿದ್ಯಾರ್ಥಿಗಳಿಗೆ ಚಂದ್ರಯಾನದ ವಿಡಿಯೋ ಪ್ರದರ್ಶಿಸಲಾಯಿತು.ಬಳಿಕ ರಸಪ್ರಶ್ನೆ ನಡೆಸಲಾಯಿತು.

ತರಕಾರಿ ಬೀಜ ವಿತರಣೆ

                         ದಿನಾಂಕ 20-07-2017 ರಂದು ವಿಧ್ಯಾರ್ಥಿಗಳಿಗೆ ತರಕಾರಿ ಬೀಜ ವಿತರಿಸಲಾಯಿತು.

ಮಂತ್ರಿಮಂಡಲ ರೂಪೀಕರಣ

 17-07-2017 ರಂದು ಶಾಲಾ  ಮಂತ್ರಿಮಂಡಲ ರಚಿಸಲಾಯಿತು.
ಸ್ಪೀಕರ್ ಪ್ರಧಾನಮಂತ್ರಿ ವಿರೋಧ ಪಕ್ಷದ ನಾಯಕಿ  ವಿವಿಧ ಮಂತ್ರಿಗಳು ಹಾಗೂ ಸಹಾಯಕರನ್ನು ಆರಿಸಲಾಯಿತು.
ಮಂತ್ರಿಗಳಾಗಿ ಆಯ್ಕೆಯಾದವರಿಗೆ ಪ್ರಮಾಣವಾಚನ ಬೋಧಿಸಲಾಯಿತು .

ವಿವಿದ ಮಂತ್ರಿಗಳು ಹಾಗೂ ಸಹಾಯಕ ಸಚಿವರೊಂದಿಗೆ ಶಾಲಾ ಅಧ್ಯಾಪಕರು.

ವಿದ್ಯಾರಂಗ ಮತ್ತು ವಿವಿಧ ಕ್ಲಬ್ ಗಳ ಉದ್ಘಾಟನೆ.

 ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ ಹಾಗೂ ವಿವಿದ ಕ್ಲಬ್ ಗಳ ಉದ್ಘಾಟನೆಯು ದಿನಾಂಕ 11-07-2017 ನೇ ಮಂಗಳವಾರ ನಡೆಯಿತು.
 ವಿದ್ಯಾರ್ಥಿಯಾದ ಶಶಾಂಕ್ ಅತಿಥಿಗಳನ್ನು ಸ್ವಾಗತಿಸಿದನು.
ಮುಖ್ಯ ಅತಿಥಿಗಳಾದ ಶ್ರೀ ಕೃಷ್ಣ ಶೆಟ್ಟಿಗಾರ್ ಔಪಚಾರಿಕವಾಗಿ ಉದ್ಘಾಟಿಸಿದರು.
ಅಧ್ಯಕ್ಷ ಸ್ಥಾನವನ್ನು ವಹಿಸಿದ ಮುಖ್ಯೋಪಾಧ್ಯಾಯರು ಕ್ಲಬ್ ಗಳ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದರೆ ಮಾತ್ರವೇ ಅದರಿಂದ ಪ್ರಯೋಜನವನ್ನು ಪಡೆಯಬಹುದು ಎಂದರು.
ಹಿರಿಯ ಅಧ್ಯಾಪಕರಾದ ಚಂದ್ರಶೇಖರ ಭಟ್ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಹಿರಿಯ ಅಧ್ಯಾಪಕರಾದ ಶೇಖರ ಶೆಟ್ಟಿ ಕಾರ್ಯಕ್ರಮಕ್ಕೆ ಶುಭಕೋರಿದರು.
 ಸುದರ್ಶನ ಕೃಷ್ಣ ವಂದಿಸಿದನು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಶತಮಾನೋತ್ಸವ ಸಮಿತಿ ರೂಪೀಕರಣ ಸಭೆ.

ಶಾಲಾ ಶತಮಾನೋತ್ಸವ ರೂಪೀಕರಣ ಸಭೆಯು ದಿನಾಂಕ 2-07-2017 ನೇ ರವಿವಾರ ನಡೆಯಿತು.ಶತಮಾನೋತ್ಸವ ನಡೆಸುವುದರ ಬಗ್ಗೆ ಚರ್ಚಿಸಲಾಯಿತು.ವಿವಿಧ ಸಮಿತಿಗಳನ್ನು ರೂಪಿಸಲಾಯಿತು.

ರಕ್ಷಕ ಶಿಕ್ಷಕ ಸಂಘದ ಮಹಾಸಭೆ

 ದಿನಾಂಕ 30-06-2017 ನೇ ಶುಕ್ರವಾರ ಮಧ್ಯಾಹ್ನ್ನ 3-00 ಗಂಟೆಗೆ ರಕ್ಷಕ ಶಿಕ್ಷಕ ಸಂಘದ ಸಭೆಯು ಜರುಗಿತು.
 ಶಾಲಾ ಮುಖ್ಯೋಪಾಧ್ಯಾಯರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.
 2017 18 ನೇ ಸಾಲಿನ ಹೊಸ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಕಳೆದ ವರ್ಷದ ಶಾಲಾ ಚಟುವಟಿಕೆಗಳ ವರದಿಯನ್ನು ಹಿರಿಯ ಅಧ್ಯಾಪಕರಾದ ಶ್ರೀ ಶೇಖರ ಶೆಟ್ಟಿ ಮಂಡಿಸಿದರು.
ಹಿರಿಯ ಅಧ್ಯಾಪಕರಾದ ಶ್ರೀ ಚಂದ್ರಶೇಖರ ಭಟ್ ವಂದಿಸಿದರು.

ಶಾಲಾ ಚುನಾವಣೆ

ದಿನಾಂಕ  29-06-2017 ರಂದು ಶಾಲಾ ನಾಯಕನ ಆಯ್ಕೆ ಪ್ರಕ್ರಿಯೆ ನಡೆಯಿತು. ಏಳನೇ ತರಗತಿಯ ಶಶಾಂಕ್ ಮತ್ತು ಕದೀಜಮ್ಮನಾಯಕನ ಸ್ಥಾನಕ್ಕೆ ಸ್ಪರ್ಧಿಸಿದ್ದರು.
 ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆಯಿತು.ಮಕ್ಕಳು ಮತ ಚಲಾಯಿಸಲು ಸಾಲಿನಲ್ಲಿ ನಿಂತರು.
 ಮತದಾನದ ಎಲ್ಲ ಪ್ರಕ್ರಿಯೆಗಳನ್ನು ಮಕ್ಕಳೇ ನಿರ್ವಹಿಸಿದರು.ಶಾಲಾ ನಾಯಕನಾಗಿ ಶಶಾಂಕ್ ಆಯ್ಕೆ ಯಾದನು.